Thursday, April 25, 2024
Homeಬೆಂಗಳೂರುಬೆಂಗಳೂರು : ನೇಣುಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ

ಬೆಂಗಳೂರು : ನೇಣುಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ

ಬೆಂಗಳೂರು,ಫೆ.22- ವೃದ್ಧ ದಂಪತಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬನಶಂಕರಿ 3ನೇ ಹಂತ, ಇಟ್ಟಮಡು ಮುಖ್ಯರಸ್ತೆ ಕೃಷ್ಣಯ್ಯ ಲೇಔಟ್‍ನ 19ನೇ ಕ್ರಾಸ್‍ನ ನಿವಾಸಿ ಕೃಷ್ಣ ನಾಯ್ಡು(84) ಮತ್ತು ಸರೋಜಮ್ಮ(74) ಮೃತಪಟ್ಟ ದಂಪತಿ.

ಈ ಮನೆಯ ಮೂರನೇ ಮಹಡಿಯಲ್ಲಿ ದಂಪತಿ ವಾಸವಾಗಿದ್ದರೆ, ನೆಲಮಹಡಿಯಲ್ಲಿ ಮಗ ಅಶೋಕ್‍ಕುಮಾರ್ ಹಾಗೂ ಸೊಸೆ ಕುಟುಂಬ ವಾಸವಿದೆ. ದಂಪತಿಯ ಮಗಳು ಮದುವೆಯಾಗಿದ್ದು, ಬೇರೆ ಕಡೆ ನೆಲೆಸಿದ್ದಾರೆ. ರಾತ್ರಿ ವಾಸವಿದ್ದ ಮನೆಯ ಒಂದು ಕಿಟಕಿಗೆ ಪಂಚೆಯಿಂದ ಕೃಷ್ಣ ನಾಯ್ಡು ನೇಣು ಬಿಗಿದುಕೊಂಡರೆ, ಮತ್ತೊಂದು ಕಿಟಕಿಗೆ ಸೀರೆಯಿಂದ ಸರೋಜಮ್ಮ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೈಜೂಸ್ ಸಂಸ್ಥಾಪಕ ರವೀಂದ್ರನ್ ವಿರುದ್ಧ ED ಲುಕೌಟ್ ನೋಟಿಸ್ ವಿಸ್ತರಣೆ

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಈ ವೃದ್ಧ ದಂಪತಿ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ ಸೊಸೆ ಮೂರನೇ ಮಹಡಿಗೆ ಹೋದಾಗ ಇವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ತಕ್ಷಣ ಪತಿ ಅಶೋಕ್ ಕುಮಾರ್‍ಗೆ ತಿಳಿಸಿದ್ದಾರೆ.

ಅಶೋಕ್‍ಕುಮಾರ್ ಪೊಲೀಸರಿಗೆ ವಿಷಯ ತಿಳಿಸಿದ್ದು, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ದಂಪತಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News