ಎಡವಿ ಮೇಲೆ ಬಿದ್ದಂತೆ ಮಾಡಿ ಸಾರಿ ಹೇಳಿ ಸರ ಕಿತ್ತು ಪರಾರಿಯಾದ..!
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು, ಏ.29 – ಎಡವಿ ಮೇಲೆ ಬಿದ್ದಂತೆ ಮಾಡಿ ಸಾರಿ ಹೇಳಿ ಮಹಿಳೆಯೊಬ್ಬರ ಸರ ಅಪಹರಿಸಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಅನಸೂಯಮ್ಮ ಸರ ಕಳೆದುಕೊಂಡ ಮಹಿಳೆ.ನಿನ್ನೆ ಮಧ್ಯಾಹ್ನ ಬನಶಂಕರಿ ದೇಗುಲದ ಬಾವಿ ಕಟ್ಟೆ ಬಳಿ ಮಗಳೊಂದಿಗೆ ನಿಂತಿದ್ದಾಗ ವ್ಯಕ್ತಿಯೊಬ್ಬ ಎಡವಿ ಮೇಲೆ ಬಿದ್ದಂತೆ ಮಾಡಿ ಸಾರಿ ಹೇಳಿ ಹೋಗಿದ್ದಾನೆ. ಆ ನಂತರ ನೋಡಿಕೊಂಡಾಗ ಕೊರಳಲ್ಲಿದ್ದ ಚಿನ್ನದ ಸರ ಕಳುವಾಗಿರುವುದು ಗೊತ್ತಾಗಿದೆ.ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸರಗಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments