ಕಾಶ್ಮೀರಕ್ಕಾಗಿ ಹೋರಾಟ ನಿಲ್ಲದು : ಜೆಯುಡಿ ಉಗ್ರ ಸಂಘಟನೆಯ ಹೊಸ ಮುಖ್ಯಸ್ಥನ ಘೋಷಣೆ
ಈ ಸುದ್ದಿಯನ್ನು ಶೇರ್ ಮಾಡಿ
ನವದೆಹಲಿ, ಮಾ.30-ಭಾರತದ ವಿರುದ್ಧ ಜಿಹಾದ್ ದಾಳಿ ನಡೆಸುವುದಾಗಿ ಘೋಷಿಸಿರುವ ಜಮಾತ್-ಉದ್-ದವಾ ಉಗ್ರಗಾಮಿ ಸಂಘಟನೆಯ ನೂತನ ಮುಖ್ಯಸ್ಥ ಹಫೀಜ್ ತಲ್ಹಾ ಸಯೀದ್, ಕಾಶ್ಮೀರಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾನೆ. ಪಾಕಿಸ್ತಾನ ಸರ್ಕಾರದಿಂದ ಗೃಹಬಂಧನಕ್ಕೆ ಒಳಗಾಗಿರುವ ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ ಪುತ್ರ ವಿಡಿಯೋವೊಂದರಲ್ಲಿ ಭಾರತದ ವಿರುದ್ಧ ವಿಷ ಕಾರಿದ್ದಾನೆ. ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ಯಲು ಪಾಕಿಸ್ತಾನ ಬಯಸಿದೆ. ಕಾಶ್ಮೀರ ಚಳವಳಿಯು ಭಯೋತ್ಪಾದನೆ ಚಳವಳಿಯಲ್ಲ. ನಮ್ಮ ಹೋರಾಟ ನಿಲ್ಲದು.
ಕಾಶ್ಮೀರಕ್ಕಾಗಿ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ವಿಡಿಯೋ ದೃಶ್ಯದಲ್ಲಿ ಹೇಳಿದ್ದಾನೆ. ಭಾರತೀಯ ಸೇನಾ ಪಡೆಗೆ ನಮ್ಮನ್ನು ಎದುರಿಸಲು ಧೈರ್ಯವಿಲ್ಲ ಎಂದು ಹೇಳಿರುವ ಸಯೀದ್, ಭಾರತದ ವಿರುದ್ಧ ಹಿಂಸಾಚಾರಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದ್ದಾನೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments