‘ನನ್ನನ್ನು ಕೊಂದ ಉಗ್ರರು ಅನುಮಾನ ಬಗೆಹರಿಸಿಕೊಳ್ಳಲಿ’ : ಐರೋಂ ಶರ್ಮಿಳಾ
ಇಂಫಾಲ್, ಆ.10– `ನನ್ನ ಹೋರಾಟದ ಬಗ್ಗೆ ಅನುಮಾನವಿದ್ದರೆ ಉಗ್ರರು ನನ್ನನ್ನು ಕೊಂದು ಅವರ ಶಂಕೆಯನ್ನು ಬಗೆಹರಿಸಿಕೊಳಲ್ಲಿ ‘ಎಂದು ನಿನ್ನೆಯಷ್ಟೇ ತಮ್ಮ 16 ವರ್ಷಗಳ ಸುಧೀರ್ಘ ಉಪವಾಸ ಹೋರಾಡವನ್ನು ಅಂತೆಗೊಳಿಸಿದ ಮಣಿಪುರದ ;ಉಕ್ಕಿನ ವೇಳೆ ಐರೋಂ ಶರ್ಮಿಳ ಹೇಳಿದ್ದಾರೆ. ತಮ್ಮ ಧೀರ್ಘಾವಧಿ ನಿಎಶನ ಅಂತ್ಯಗೊಳಿಸಲು ಯಾವುದೆ ಒತ್ತಡ ಅಥವಾ ಬೆದರಿಕೆ ಕಾರಣವೆ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಇಂದು ಉತ್ತರಿಸಿದ ಅವರು, ಕೆಲವರಿಗೆ ಈಗ ಇದನ್ನು ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ . ಹಿಂದು ವಿರೋಧಿ ಎಂದು ಆರೋಪಿಸಿ ಗಾಂಧಿ ಅವರನ್ನ ಕೊಂದ ರೀತಿಯಲ್ಲಿ, ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ರೀತಿಯಲ್ಲಿ ನನ್ನನ್ನು ಕೊಲ್ಲಲಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಮಣಿಪುದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್ಎಪಿಎ) ವಿರುದ್ಧ ತಾವು ಕೈಗೊಂಡಿದ್ದ ಉಪವಾಸ ಹಿಂತೆಗೆದು ಕೊಂಡ ಬಗ್ಗೆ ಕೆಲವು ಉಗ್ರಗಾಮಿ ಸಂಘಟನೆಗಳಿಗೆ ತೀವ್ರ ಅಸಮಾಧಾನವಾಗಿದೆ ಎಂದು ವರದಿಗಳ ಹಿನ್ನೆಲೆಯಲ್ಲಿ ಶರ್ಮಿಳ ಈ ಹೇಳಿಕೆ ನೀಡಿದ್ದಾರೆ. ಬೇಕಾಗಿದ್ದಾರೆ ಉಗ್ರರು ನನ್ನ ರಕ್ತದಿಂದ ಅವರು ಅನುಮಾನಗಳನ್ನು ತೊಳದು ನನ್ನ ಹೋರಾಟದ ಬಗ್ಗೆ ಇವರು ಶಂಕೆಗಳನ್ನು ಪರಿಹರಿಸಿಕೊಳಲ್ಲಿ ಎಂದು ಹೇಳಿದ್ದಾರೆ.
► Follow us on – Facebook / Twitter / Google+