ಬಸ್’ಗಳ ನಡುವೆ ಮುಖಾಮುಖಿ ಡಿಕ್ಕಿ, ಮದುಮಗಳು ಸೇರಿ 7 ಮಂದಿ ದಾರುಣ ಸಾವು
ಉತ್ತರಕನ್ನಡ, ಮೇ 25-ಖಾಸಗಿ ಬಸ್ ಹಾಗೂ ಮಿನಿಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮದು ಮಗಳು ಸೇರಿದಂತೆ 7 ಮಂದಿ ದಾರುಣವಾಗಿ ಸಾವನ್ನಪ್ಪಿ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಅನಂತವಾಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮದುಮಗಳು ದಿವ್ಯಾಕುರ್ಡೇಕರ್(23), ಖಾಸಗಿ ಬಸ್ ಚಾಲಕ ಉಮೇಶ್ ವಾಲ್ಮೀಕಿ(35), ಪಾಲಾಕ್ಷಿ(38), ಬೇಬಿ(38), ನಾಗಪ್ಪ ಗಾಣಿಗೇರ(46), ಸುಬ್ರಹ್ಮಣ್ಯ(15), ಪೂಜಾಶೇಟ್(25) ಮೃತಪಟ್ಟ ದುರ್ದೈವಿಗಳು.
ನಾಳೆ(ಮೇ 26) ದಿವ್ಯಾಕುರ್ಡೇಕರ್ ಅವರ ಮದುವೆ ಧರ್ಮಸ್ಥಳದಲ್ಲಿ ನಿಗದಿಯಾಗಿದ್ದು, ಮದುವೆ ಸಮಾರಂಭಕ್ಕೆಂದು ಮಿನಿಬಸ್ನಲ್ಲಿ ಶಿರಸಿಯಿಂದ ದಾಸನಕೊಪ್ಪಕ್ಕೆ ಹೊರಟಿದ್ದರು. ಖಾಸಗಿ ಬಸ್ ಮಂಗಳೂರಿನಿಂದ ಹೊನ್ನಾರವರದತ್ತ ಬರುತ್ತಿತ್ತು.
ಅನಂತವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಬಂದ ಖಾಸಗಿ ಬಸ್ಗೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಮಣಿಪಾಲ್ ಹಾಗೂ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS