ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ
ಬೀದರ್, ಮೇ 16- ಗ್ರಾಮ ಪಂಚಾಯ್ತಿ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂದಕನಹಳ್ಳಿ ಗ್ರಾಪಂ ಸದಸ್ಯ ರಮೇಶ್(45) ಕೊಲೆಯಾದ ದುರ್ದೈವಿ. ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಜಗಳವೇ ಕೊಲೆಗೆ ಕಾರಣ ಎಂದು ರಮೇಶನ ಕಡೆಯವರು ಆರೋಪಿಸಿದ್ದಾರೆ. ಮಂದಕನಹಳ್ಳಿ ಗ್ರಾಪಂನ ಅಧ್ಯಕ್ಷ ರಿಯಾಜುದ್ದೀನ್ ಮತ್ತು ರಮೇಶ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಕೊಲೆ ಹಿಂದೆ ಆತನ ಕೈವಾಡವಿದೆ ಎಂದು ದೂರಿದ್ದಾರೆ. ರಮೇಶನ ಪತ್ನಿ ಸಹ ತಾಲ್ಲೂಕು ಪಂಚಾಯ್ತಿ ಸದಸ್ಯೆ ಆಗಿದ್ದು, ರಮೇಶನಿಗೆ ಐದು ಜನ ಮಕ್ಕಳಿದ್ದಾರೆ. ಒಂದು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳಿದ್ದು, ರಮೇಶನ ಕೊಲೆಯಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಕೊಲೆಗಾರರ ಪತ್ತೆಗೆ ಟೌನ್ ಠಾಣೆ ಪೊಲೀಸರು ಬಲೆ ಬೀಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS