‘ರನ್ ಫಾರ್ ಲೈಟ್’ ಮ್ಯಾರಥಾನ್ ಓಟಕ್ಕೆ ಚಾಲನೆ
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು, ಅ.23-ರನ್ ಫಾರ್ ಲೈಟ್ 10ಕೆ ಮ್ಯಾರಥಾನ್ ಓಟಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಿಂದ ಆರಂಭವಾದ ಈ ಓಟಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಅಂಗವಿಕಲರ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.
ಶಾಸಕರಾದ ಟಿ.ಎನ್.ವಿಜಯ್ಕುಮಾರ್, ಬಿಬಿಎಂಪಿ ಸದಸ್ಯ ನಾಗರಾಜ್, ಅಥ್ಲೆಟಿ ವಿನೋದ್ ಮತ್ತಿತರರು ಪಾಲ್ಗೊಂಡಿದ್ದರು. ಸೌತ್ಎಂಡ್ ಸರ್ಕಲ್ ಮೂಲಕ ಈ ಓಟ ಸಾಗಲಿದೆ. ಪಿನಿಕ್ ಟ್ರ್ಯಾಕ್ ಸಹಯೋಗದೊಂದಿಗೆ ಈ ಮ್ಯಾರಥಾನ್ ಆಯೋಜಿಸಲಾಗಿತ್ತು.
► Follow us on – Facebook / Twitter / Google+
Facebook Comments