ಸಿಡಿಲು ಬಡಿದು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗೋಪುರಕ್ಕೆ ಹಾನಿ
ಈ ಸುದ್ದಿಯನ್ನು ಶೇರ್ ಮಾಡಿ
ದಕ್ಷಿಣ ಕನ್ನಡ, ಮೇ 22- ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ, ಗುಡುಗು-ಸಿಡಿಲಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಗೋಪುರಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಸುಳ್ಯ ತಾಲ್ಲೂಕಿನ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗೋಪುರಕ್ಕೆ ಸಿಡಿಲು ಬಡಿದ ಕಾರಣ ಭಾಗಶಃ ಹಾನಿಯುಂ ಟಾಗಿದ್ದು, ಗೋಪುರದ ತುದಿಯಲ್ಲಿನ ಕಾಂಕ್ರೀಟ್ ಮುರಿದು ಬಿದ್ದಿದೆ. ದೇವಾಲಯಕ್ಕೆ ಸಿಡಿಲು ನಿರೋಧಕವನ್ನು ಅಳವಡಿಸಿರುವುದರಿಂದ ಭಾರೀ ಅನಾಹುತಗಳು ತಪ್ಪಿದಂತಾಗಿದೆ.
ಸುಬ್ರಹ್ಮಣ್ಯ ಆಸು ಪಾಸಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ವಾಗಿ ಮಳೆ ಜತೆಗೆ ಗುಡುಗು-ಸಿಡಿಲು, ಮಿಂಚಿನ ಆರ್ಭಟ ಹೆಚ್ಚಾಗಿತ್ತು. ನಿನ್ನೆ ದೇವಾಲಯದ ಗೋಪುರಕ್ಕೆ ಸಿಡಿಲು ಬಡಿದಿದ್ದು, ಹೆಚ್ಚಿನ ಅನಾಹುತ ಸಂಭವಿಸದ ಕಾರಣ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments