10,000 ರೂ. ಲಂಚ ಪಡೆಯುತ್ತಿದ್ದ ಡಿಪೋ ಮ್ಯಾನೇಜರ್ ಎಸಿಬಿ ಬಲೆಗೆ
ಈ ಸುದ್ದಿಯನ್ನು ಶೇರ್ ಮಾಡಿ
ಕೊಪ್ಪಳ, ಏ.18- ಚಾಲಕನಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕುಕನೂರು ಡಿಪೋದ ಮ್ಯಾನೇಜರ್ ಬೋರಯ್ಯ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಸಸ್ಪೆಂಡ್ ಆಗಿದ್ದ ಚಾಲಕ ಸತ್ಯರಾಜ್ ಅವರಿಗೆ ನೆರವು ನೀಡುವ ಮತ್ತು ಪ್ರಕರಣದಿಂದ ಕೈ ಬಿಡುವ ಭರವಸೆ ನೀಡಿ ಅದಕ್ಕಾಗಿ 10, 000 ಲಂಚ ಕೇಳಿದ್ದರು. ಇಂದು ವಿಭಾಗ ಕಚೇರಿಯಲ್ಲೇ ಅದನ್ನು ಪಡೆಯುವಾಗ ಎಸಿಬಿ, ಡಿವೈಎಸ್ಪಿ ಅರುಣ್ ಕೋಳೂರು ನೇತೃತ್ವದ ತಂಡದ ದಾಳಿಗೆ ಸಿಕ್ಕಿ ಬಿದ್ದಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments