21 ಲಕ್ಷ ರೂ. ಹಳೆ ನೋಟುಗಳ ಸಾಗಾಟ : ಮೂವರ ಬಂಧನ
ದಾವಣಗೆರೆ, ಮಾ.15- ನಿಷೇಧಿತ 500 ಹಾಗೂ 1000ರೂ.ಗಳ ಹಳೆ ನೋಟುಗಳ ಸಮೇತ ಮೂವರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನದ ಸುನಿಲ್ಕುಮಾರ್, ಚನ್ನಪಟ್ಟಣದ ಪ್ರದೀಪ್, ಶಿರಾ ತಾಲೂಕಿನ ಲಕ್ಷ್ಮಿಕಾಂತ್ ಬಂಧಿತರು.ಹಾಸನದಿಂದ ದಾವಣಗೆರೆ ಶಿಫ್ಟ್ ಡಿಸೈರ್ ಕಾರಿನಲ್ಲಿ ಮೂವರು ನಿಷೇಧಿತ 500 ಹಾಗೂ 1000ರೂ. ಮುಖಬೆಲೆಯ 21 ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದರು.ರಾಷ್ಟ್ರೀಯ ಹೆದ್ದಾರಿ-4ರ ಡಾಬಾವೊಂದರ ಬಳಿ ರಾತ್ರಿ ಕಾರು ನಿಲ್ಲಿಸಿದ್ದರು. ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಈ ಹಣ ಸಿಕ್ಕಿದೆ.
ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.2016ರ ಪೊಲೀಸ್ ನೇಮಕಾತಿ ಪ್ರಶ್ನೆಪತ್ರಿಕೆ ಬಯಲು ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಹಾಸನ ಮೂಲದ ಸಶಸ್ತ್ರ ಪೊಲೀಸ್ ಪೇದೆಯೊಬ್ಬರು ಈ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಈ ಸಂಜೆಗೆ ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS