500ರೂ.ಲಂಚ ಪಡೆಯುತ್ತಿದ್ದ ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಎಸಿಬಿ ಬಲೆಗೆ
ಈ ಸುದ್ದಿಯನ್ನು ಶೇರ್ ಮಾಡಿ
ಆನೇಕಲ್, ಫೆ.24- ಕೆಲಸ ನಿಗದಿಪಡಿಸುವ ಸಲುವಾಗಿ ನಿರ್ವಾಹಕನಿಂದ 500ರೂ. ಲಂಚ ಪಡೆಯುತ್ತಿದ್ದ ಇಲ್ಲಿನ ಕೆಎಸ್ಆರ್ಟಿಸಿ ಡಿಪೋದ ಸಂಚಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಗಿರೀಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ನಿರ್ವಾಹಕ ಉಮೇಶ್ ಎಂಬುವರು ಆರೋಗ್ಯ ಸರಿಯಿಲ್ಲ. ದೂರದೂರಿನ ರೂಟ್ಗೆ ಕೆಲಸ ನಿಯೋಜಿಸಬೇಡಿ ಎಂದು ಮನವಿ ಮಾಡಿದ್ದರು. ಅದಕ್ಕೆ ಗಿರೀಶ್ ಸರಿಯಾಗಿ ಸ್ಪಂದಿಸಿರಲಿಲ್ಲ. ಆದರೆ, ಮಾಮೂಲು ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.ನಿನ್ನೆ ಸಂಜೆ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಂದು ಮುಂಜಾನೆ ರೆಡ್ಹ್ಯಾಂಡಾಗಿ ಗಿರೀಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.ಇನ್ಸ್ಪೆಕ್ಟರ್ ಹಾಲಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪ್ರಸ್ತುತ ಆರೋಪಿಯನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments