Friday, April 19, 2024
Homeರಾಜಕೀಯಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳ ಜಾಹಿರಾತು ಮಾಡಲ್ಲ : ಅಕ್ಷಯ್ ಕುಮಾರ್

ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳ ಜಾಹಿರಾತು ಮಾಡಲ್ಲ : ಅಕ್ಷಯ್ ಕುಮಾರ್

ಮುಂಬೈ, ಅ 10 (ಪಿಟಿಐ)- ಮತ್ತೆ ಪಾನ್ ಮಸಾಲಾ ಬ್ರಾಂಡ್‍ನ ರಾಯಭಾರಿಯಾಗಿ ಮರಳಿದ್ದೇನೆ ಎಂದು ಬಂದಿರುವ ವರದಿ ಸುಳ್ಳು ಎಂದು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಸ್ಪಷ್ಟಪಡಿಸಿದ್ದು, ಯಾವುದೇ ಕಾರಣಕ್ಕೂ ಅಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ಅಕ್ಷಯ್‍ಕುಮಾರ್ ವಿಮಲ್ ಪಾನ್ ಮಸಾಲಾ ರಾಯಭಾರಿಯಾಗಿ ಮರಳುತ್ತಾರೆ ಎಂದು ನಿನ್ನೆ ಎಕ್ಸ್‍ನಲ್ಲಿ ಮಾಡಿದ್ದ ಫೋಸ್ಟ್ ನಕಲಿ ಕಳೆದ 2022 ರ ಏಪ್ರಿಲ್‍ನಲ್ಲಿ ಬ್ರ್ಯಾಂಡ್‍ನೊಂದಿಗಿನ ಸಂಬಂಧವನ್ನು ಕಡಿತಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಈಗ ಪ್ರಸಾರವಾಗುತ್ತಿರುವ ಜಾಹೀರಾತು 2021ರಲ್ಲಿ ಚಿತ್ರಿಕರಿಸಿರುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ನಾನು ಅನುಮೋದನೆಯನ್ನು ಸ್ಥಗಿತಗೊಳಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿದಾಗಿನಿಂದ ನಾನು ಬ್ರ್ಯಾಂಡ್‍ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅವರು ಈಗಾಗಲೇ ಚಿತ್ರೀಕರಿಸಿದ ಜಾಹೀರಾತುಗಳನ್ನು ಮುಂದಿನ ತಿಂಗಳ ಅಂತ್ಯದವರೆಗೆ ಕಾನೂನುಬದ್ಧವಾಗಿ ಚಲಾಯಿಸಬಹುದು. ಚಿಲ್ ಮತ್ತು ಕೆಲವು ನೈಜ ಸುದ್ದಿಗಳನ್ನು ಮಾತ್ರ ಪ್ರಸಾರ ಮಾಡಿ ಎಂದು ಆಕ್ಷನ್ ಹೀರೋ ಅಕ್ಷಯ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಡೋರ್ ಲಾಕ್ ಒಡೆದು ಚಿನ್ನಾಭರಣ ಲೂಟಿ, ಇಬ್ಬರು ನೇಪಾಳದ ಸೆಕ್ಯೂರಿಟಿ ಗಾರ್ಡ್ ಬಂಧನ

ಬ್ರ್ಯಾಂಡ್‍ನ ಇತ್ತೀಚಿನ ಜಾಹೀರಾತು ಜಾಹೀರಾತು ಭಾನುವಾರ ಸಂಜೆ ಪ್ರಸಾರವಾದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರ ವಿಭಾಗವು ಅಕ್ಷಯ್ ಅವರನ್ನು ಕಪಟ ಎಂದು ಜರಿದಿತ್ತು. ಅವರು ಬ್ರಾಂಡ್ ಅಂಬಾಸಿಡರ್ ಆಗಿ ಹಿಂದೆ ಸರಿಯುವ ಮೊದಲು ಜಾಹೀರಾತು ಚಿತ್ರೀಕರಿಸಿರಬಹುದು ಎಂದು ಇತರರು ಅವರನ್ನು ಕೆಲವರು ಬೆಂಬಲಿಸಿದ್ದರು.

ಕೋವಿಡ್ ಹಗರಣದ ಬೆನ್ನುಬಿದ್ದ ಕುನ್ಹಾ

ಕಳೆದ ವರ್ಷ, ಅಕ್ಷಯ್ ಬ್ರ್ಯಾಂಡ್ ಅನ್ನು ಅನುಮೋದಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು, ಸಾಮಾಜಿಕ ಮಾಧ್ಯಮ ಬಳಕೆದಾರರು ಹಳೆಯ ವೀಡಿಯೊ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನಂತರ ಅವರು ಎಂದಿಗೂ ತಂಬಾಕನ್ನು ಉತ್ತೇಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

RELATED ARTICLES

Latest News