Skip to content
Latest:
  • ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (09-03-2021)
  • 111 ಮಹಿಳೆಯರಿಗೆ ‘ಪವರ್ ವುಮನ್ಸ್ ಆವಾರ್ಡ್’, ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ
  • ಮಹಿಳಾ ಉದ್ಯಮಿಗಳಿಗೆ ಬಜೆಟ್ ನಲ್ಲಿ ಭರ್ಜರಿ ಸುದ್ದಿ..!
  • ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ ಜೊತೆ ಮಕ್ಕಳ ಆರೈಕೆಗೂ 6 ತಿಂಗಳ ರಜೆ
  • ಕೊರೊನಾ ನಿಯಂತ್ರಣದಲ್ಲಿದೆ, ಭೀತಿ ಬೇಡ, ಲಸಿಕೆ ಹಾಕಿಸಿಕೊಳ್ಳಿ : ಕೇಂದ್ರ ಸಚಿವ ಹರ್ಷವರ್ಧನ್
EESANJE / ಈ ಸಂಜೆ

EESANJE / ಈ ಸಂಜೆ

Kannada Evening Daily

  • ತಾಜಾ ಸುದ್ದಿ
  • ಕೋವಿಡ್-19
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
  • ಜಿಲ್ಲೆಗಳು
    • ಕರಾವಳಿ
    • ತುಮಕೂರು
    • ಬೆಳಗಾವಿ
    • ಹುಬ್ಬಳ್ಳಿ- ಧಾರವಾಡ
    • ಕೋಲಾರ
    • ಮಂಡ್ಯ
    • ಮೈಸೂರು
    • ಚಿಕ್ಕಮಗಳೂರು
    • ಚಿಕ್ಕಬಳ್ಳಾಪುರ
    • ಹಾಸನ
    • ಶಿವಮೊಗ್ಗ
    • ಬೆಂಗಳೂರು ಗ್ರಾಮಾಂತರ
    • ದಾವಣಗೆರೆ
    • ಕೊಡಗು
    • ಚಿತ್ರದುರ್ಗ
    • ರಾಮನಗರ
    • ರಾಯಚೂರು
    • ಕಲಬುರಗಿ
    • ಚಾಮರಾಜನಗರ
    • ಬಳ್ಳಾರಿ
    • ಗದಗ
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಹಾವೇರಿ
    • ಬೀದರ್
  • ಬೆಂಗಳೂರು
  • ಸಿನಿಮಾ
    • TV
  • ಕ್ರೀಡೆ
  • ಆರೋಗ್ಯ
  • ಲೈಫ್ ಸ್ಟೈಲ್
  • ಉದ್ಯೋಗ
  • Aragini
  • ePaper
  • VIDEO
  • ಮತ್ತಷ್ಟು
    • ವಾಣಿಜ್ಯ
    • ದಿನಕ್ಕೊಂದು ಅಚ್ಚರಿ
    • ಕನ್ನಡ ರಾಜ್ಯೋತ್ಸವ
    • ಲೇಖನಗಳು
    • ಆಯುರ್ವೇದ
    • ಗ್ಯಾಲರಿ
    • ಚಿತ್ರ ಸುದ್ದಿ
    • ವಿವಿಧ
    • ಶಿಕ್ಷಣ
    • ದಸರಾ / ದೀಪಾವಳಿ
    • Contact Us
ತಾಜಾ ಸುದ್ದಿಗಳು ಬೆಂಗಳೂರು 

ಬಿಬಿಎಂಪಿ ಮತ್ತಷ್ಟು ಡಿಜಿಟಲ್, ಆನ್‌ಲೈನ್‌ನಲ್ಲೇ ಸಿಗಲಿದೆ ನಿಮ್ಮ ಆಸ್ತಿ ವಿವರ

November 13, 2020 Sunil Kumar bbmp Digital account, DG Locker, online, property details
ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.13- ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸುವವರಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಬಿಬಿಎಂಪಿ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದೆ.
ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರು ಖಾತೆಗಾಗಿ ಬಿಬಿಎಂಪಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಆಡಳಿತಾಧಿಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿಂದು ವಿವರಿಸಿದರು.

ಹಳೆ ಬೆಂಗಳೂರಿನ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ನೂರು ವಾರ್ಡ್‍ಗಳಲ್ಲಿ ಇ-ಆಸ್ತಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಾಯೋಗಿಕವಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ವಾರ್ಡ್‍ಗಳಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ಇ-ಆಸ್ತಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯನ್ನು ಹಂತ ಹಂತವಾಗಿ ನೂರು ವಾರ್ಡ್‍ಗಳಿಗೆ ವಿತರಿಸಲಾಗುವುದು ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.

ಇ-ಆಸ್ತಿ ವ್ಯವಸ್ಥೆ ಜಾರಿಗೆ ಬಂದ ನಂತರ ಬಿಬಿಎಂಪಿ ಅಧಿಕಾರಿಗಳು ಕೈ ಬರಹದಲ್ಲಿ ಸಹಿ ಮಾಡಿರುವ ಖಾತಾ ಪತ್ರಗಳು ಹಾಗೂ ಖಾತಾ ಎಕ್ಸ್‍ಟ್ರಾಕ್ಟ್‍ಗಳನ್ನು ಬ್ಯಾನ್ ಮಾಡಿ ಡಿಜಿಟಲ್ ಖಾತಾ ಪತ್ರ ವಿತರಿಸಲಾಗುವುದು ಎಂದು ಹೇಳಿದರು. 2018ರಿಂದ ಸಕಾಲ ಯೋಜನೆಯಡಿ ನಗರದಲ್ಲಿ 2.87 ಲಕ್ಷಕ್ಕೂ ಹೆಚ್ಚು ಕೈ ಬರಹದ ಖಾತಾಗಳನ್ನು ವಿತರಿಸಲಾಗಿದೆ. ಡಿಜಿಟಲ್ ಖಾತಾ ವ್ಯವಸ್ಥೆ ಜಾರಿಗೆ ಬಂದ ನಂತರ ಕೈ ಬರಹದ ಯಾವುದೇ ದಾಖಲೆಗಳನ್ನು ನೀಡಲಾಗುವುದಿಲ್ಲ.

ಆಸ್ತಿ ಮಾಲೀಕರ ಭಾವಚಿತ್ರ ಸೇರಿದಂತೆ 18 ವಿಷಯಗಳಿಗೆ ಸಂಬಂಧಿಸಿದ 46 ಅಂಶಗಳನ್ನೊಳಗೊಂಡು ಅಧಿಕಾರಿಗಳ ಡಿಜಿಟಲ್ ಸಹಿ ಇರುವ ಡಿಜಿಟಲ್ ಖಾತಾಗಳನ್ನು ವಿತರಿಸಲಾಗುವುದು. ಇದು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವುದನ್ನು ತಪ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಡಿಜಿಟಲ್ ಖಾತಾ ಪತ್ರಗಳನ್ನು ಸಾರ್ವಜನಿಕರು ಡಿಜಿ ಲಾಕರ್ ಮೂಲಕವೂ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಇನ್ನು ಮುಂದೆ ಒಂದು ಆಸ್ತಿಯನ್ನು ಮತ್ತೊಬ್ಬರು ಖರೀದಿ ಮಾಡಿ ನೋಂದಣಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಖಾತಾ ಮತ್ತು ಎಕ್ಸ್‍ಟ್ರಾಕ್ಟ್‍ಗಳನ್ನು ಅಧಿಕಾರಿಗಳಿಗೆ ನೀಡುವ ಪ್ರಮೇಯವೇ ಬರುವುದಿಲ್ಲ. ನೋಂದಣಿ ಮಾಡುವ ಅಧಿಕಾರಿಗಳು ಕಾವೇರಿ ವೆಬ್‍ಸೈಟ್ ಮೂಲಕವೇ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಆಸ್ತಿ ಖರೀದಿಸಿದ ನಂತರ ಖಾತಾ ವರ್ಗಾವಣೆಯು ಆನ್‍ಲೈನ್ ಮೂಲಕವೇ ನಡೆಯುವುದರಿಂದ ಸಾರ್ವಜನಿಕರು ದಾಖಲೆ ಪತ್ರ ಪಡೆಯಲು ಬಿಬಿಎಂಪಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲಿದೆ ಎಂದು ಮಂಜುನಾಥ್ ಪ್ರಸಾದ್ ಅಭಿಪ್ರಾಯಪಟ್ಟರು.

ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಆನ್‍ಲೈನ್ ಮೂಲಕವೇ ಸಿಗುವಂತೆ ಮಾಡುವ ಉದ್ದೇಶದಿಂದ ಇ-ಆಸ್ತಿ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಈ ಯೋಜನೆಯನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದರು.

Facebook Comments

  • ← ರಾಜ್ಯದಲ್ಲಿ 7 ತಿಂಗಳ ಬಳಿಕ ನ.17ರಿಂದ ವಿದ್ಯಾರ್ಥಿ ನಿಲಯಗಳು ಓಪನ್
  • ಭಾರತದಲ್ಲಿ WHO ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆ : ಪ್ರಧಾನಿ ಮೋದಿ ಸಂತಸ →

ಜನಾಭಿಪ್ರಾಯ

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಸರಿಯೇ..?

View Results

ದಿನಕ್ಕೊಂದು ಅಚ್ಚರಿ

ನಿಮಗೆ ಗೊತ್ತೆ..? ಈ ಮರದಲ್ಲೇ ಕುರ್ಚಿ ಬೆಳೆಯುತ್ತೆ..!
ತಾಜಾ ಸುದ್ದಿಗಳು ದಿನಕ್ಕೊಂದು ಅಚ್ಚರಿ 

ನಿಮಗೆ ಗೊತ್ತೆ..? ಈ ಮರದಲ್ಲೇ ಕುರ್ಚಿ ಬೆಳೆಯುತ್ತೆ..!

October 19, 2019 Sunil Kumar
ಈ ಸುದ್ದಿಯನ್ನು ಶೇರ್ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ

ಸಿನಿಮಾ

‘ಬಿಗ್ ಬಾಸ್’ ಮನೆಗೆ ಹೋಗುವ ಕುರಿತು ರಾಗಿಣಿ ಹೇಳಿದ್ದೇನು ಗೊತ್ತೇ..?
ತಾಜಾ ಸುದ್ದಿಗಳು ಸಿನೆಮಾ ಸುದ್ದಿಗಳು 

‘ಬಿಗ್ ಬಾಸ್’ ಮನೆಗೆ ಹೋಗುವ ಕುರಿತು ರಾಗಿಣಿ ಹೇಳಿದ್ದೇನು ಗೊತ್ತೇ..?

February 26, 2021 Sri Raghav
ಈ ಸುದ್ದಿಯನ್ನು ಶೇರ್ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿಬೆಂಗಳೂರು, ಫೆ.26- ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಕ್ಕಳು ಏನೆಂಬುದು ಗೊತ್ತಿರುತ್ತದೆ. ಹಾಗಾಗಿ ಸಂಕಷ್ಟದ ಸಮಯದಲ್ಲಿ ಪೋಷಕರು ನನ್ನ ಬೆಂಬಲಕ್ಕೆ ನಿಂತಿದ್ದರು. ಶೀಘ್ರವಾಗಿ ನಾನು

ಚರ್ಚೆಗೆ ಕಾರಣವಾಗಿದೆ ‘ ರಾಬರ್ಟ್’ ಟ್ರೇಲರ್‌ನ ಆ ಡೈಲಾಗ್..!
ತಾಜಾ ಸುದ್ದಿಗಳು ಸಿನೆಮಾ ಸುದ್ದಿಗಳು 

ಚರ್ಚೆಗೆ ಕಾರಣವಾಗಿದೆ ‘ ರಾಬರ್ಟ್’ ಟ್ರೇಲರ್‌ನ ಆ ಡೈಲಾಗ್..!

February 25, 2021 Sunil Kumar
“ತಪ್ಪಾಗಿದ್ದರೆ ಕ್ಷಮಿಸಿ ಬಿಡಿ” : ಧೃವಸರ್ಜಾ
ತಾಜಾ ಸುದ್ದಿಗಳು ಸಿನೆಮಾ ಸುದ್ದಿಗಳು 

“ತಪ್ಪಾಗಿದ್ದರೆ ಕ್ಷಮಿಸಿ ಬಿಡಿ” : ಧೃವಸರ್ಜಾ

February 25, 2021 Sunil Kumar
ಪೊಗರು ಚಿತ್ರದಲ್ಲಿ ಆಕ್ಷೇಪಾರ್ಥ ದೃಶ್ಯಗಳಿಗೆ ಕತ್ತರಿ ಪ್ರಯೋಗ
ತಾಜಾ ಸುದ್ದಿಗಳು ಸಿನೆಮಾ ಸುದ್ದಿಗಳು 

ಪೊಗರು ಚಿತ್ರದಲ್ಲಿ ಆಕ್ಷೇಪಾರ್ಥ ದೃಶ್ಯಗಳಿಗೆ ಕತ್ತರಿ ಪ್ರಯೋಗ

February 24, 2021 Sri Raghav

Videos

ದೇವರಾಯನ ದುರ್ಗ ಬಗ್ಗೆ ನಿಮಗೆ ಗೊತ್ತಿರದ ಐತಿಹಾಸಿಕ, ರೋಚಕ ಮಾಹಿತಿ ಇಲ್ಲಿದೆ.
ತಾಜಾ ಸುದ್ದಿಗಳು ವಿಡಿಯೋ 

ದೇವರಾಯನ ದುರ್ಗ ಬಗ್ಗೆ ನಿಮಗೆ ಗೊತ್ತಿರದ ಐತಿಹಾಸಿಕ, ರೋಚಕ ಮಾಹಿತಿ ಇಲ್ಲಿದೆ.

November 14, 2020 Sri Raghav
ಈ ಸುದ್ದಿಯನ್ನು ಶೇರ್ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿದೇವರಾಯನದುರ್ಗ ಬೆಂಗಳೂರಿನಿಂದ 65 ಕಿ.ಮೀ. ಮತ್ತು ತುಮಕೂರಿನಿಂದ 16 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 10 ಕಿ.ಮೀ. ದಾಟಿದರೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಈ

ಕಾಲುಬಾಯಿ, ವಿಷಾಣು ವೈರಸ್ || ಲಸಿಕೆ ಹಾಕಿಸದಿದ್ದರೇ ಅಪಾಯ ಗ್ಯಾರಂಟಿ..!
ವಿಡಿಯೋ 

ಕಾಲುಬಾಯಿ, ವಿಷಾಣು ವೈರಸ್ || ಲಸಿಕೆ ಹಾಕಿಸದಿದ್ದರೇ ಅಪಾಯ ಗ್ಯಾರಂಟಿ..!

November 12, 2020November 12, 2020 Sri Raghav
ಬಿರಾದಾರ್ ಅವರಿಗೆ ಬಿಗ್ ಬಿ ಕಾಲ್ ಮಾಡಿದ್ರಂತೆ..! ಬಿರಾದಾರ್ EXCLUSIVE INTERVIEW
ತಾಜಾ ಸುದ್ದಿಗಳು ವಿಡಿಯೋ ಸಿನೆಮಾ ಸುದ್ದಿಗಳು 

ಬಿರಾದಾರ್ ಅವರಿಗೆ ಬಿಗ್ ಬಿ ಕಾಲ್ ಮಾಡಿದ್ರಂತೆ..! ಬಿರಾದಾರ್ EXCLUSIVE INTERVIEW

October 22, 2020October 22, 2020 Sri Raghav
ಅಕ್ಬರನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಧೀರಮಾತೆ ರಾಣಿ ದುರ್ಗಾವತಿ..!
ವಿಡಿಯೋ 

ಅಕ್ಬರನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಧೀರಮಾತೆ ರಾಣಿ ದುರ್ಗಾವತಿ..!

October 11, 2020 Sri Raghav
Copyright © 2021 EESANJE / ಈ ಸಂಜೆ. All rights reserved.
Powered by Mediology Software.