Thursday, April 25, 2024
Homeರಾಜ್ಯಹೊಂದಾಣಿಕೆ ರಾಜಕಾರಣದ ಅನುಮಾನ, ಸೈಲೆಂಟಾಗಿ ಮುಗಿದೋಯ್ತು ಬೆಳಗಾವಿ ಅಧಿವೇಶನ

ಹೊಂದಾಣಿಕೆ ರಾಜಕಾರಣದ ಅನುಮಾನ, ಸೈಲೆಂಟಾಗಿ ಮುಗಿದೋಯ್ತು ಬೆಳಗಾವಿ ಅಧಿವೇಶನ

ಬೆಂಗಳೂರು, ಡಿ.16- ಸುವರ್ಣ ಸೌಧದಲ್ಲಿ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷಗಳ ಸಹಿಷ್ಣತೆ, ಕಾಂಗ್ರೆಸ್ನ ಅಬ್ಬರ ಎದ್ದುಕಾಣುತ್ತಿದ್ದು, ರಾಜಕೀಯ ಹೊಂದಾಣಿಕೆಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಆರು ತಿಂಗಳಿನಿಂದಲೂ ವಿರೋಧ ಪಕ್ಷದ ನಾಯಕರನ್ನು ನೇಮಿಸದೇ ಇದ್ದ ಬಿಜೆಪಿ ಕೆಲವು ದಿನಗಳ ಹಿಂದಷ್ಟೇ ವಿಧಾನಸಭೆಗೆ ಆರ್. ಅಶೋಕ್ ಅವರನ್ನು ವಿಪಕ್ಷ ನಾಯಕರನ್ನಾಗಿ ನೇಮಿಸಿತ್ತು. ಬಿಜೆಪಿಗೆ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.

ವಿಧಾನಸಭೆ ಕಲಾಪದಲ್ಲಿ ಅಶೋಕ್ ಅವರಿಗೆ ಪಕ್ಷಭೇದ ಮರೆತು ಅಭಿನಂದನೆ ಸಲ್ಲಿಸಿದರು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಇಬ್ಬರಿಗೂ ಅಭಿನಂದನೆ ಸಲ್ಲಿಸುವುದಿಲ್ಲ ಎಂದು ಹೇಳುವ ಮೂಲಕ ಸೆಟೆದು ನಿಂತರು.ನಿನ್ನೆ ನಡೆದ ಚರ್ಚೆಯಲ್ಲಿಯೂ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಹೊಂದಾಣಿಕೆ ಇದೆ ಎಂದು ನೇರವಾಗಿಯೇ ಆರೋಪಿಸಿದ್ದರು. ಅದಕ್ಕೆ ಪೂರಕ ಎಂಬಂತೆ ಬಿಜೆಪಿ ನಾಯಕರು ಚರ್ಚೆಯ ಪ್ರತಿ ಹಂತದಲ್ಲೂ ಮೃದು ಧೋರಣೆಯನ್ನು ಅನುಭವಿ ಸುತ್ತಿದ್ದುದು ಕಂಡುಬಂದಿತು.

ವಿಪಕ್ಷ ನಾಯಕ ಆರ್. ಅಶೋಕ್ ತಮಗೆ ಅಟಲ್ಬಿಹಾರಿ ವಾಜಪೇಯಿ ಮಾದರಿ. ನಾನು ಅವರಂತೆಯೇ ಲಕ್ಷ್ಮಣ ರೇಖೆ ದಾಟುವುದಿಲ್ಲ ಎಂದು ಸದನ ದಲ್ಲೇ ಘೋಷಣೆ ಮಾಡಿದ್ದರು. ಹತ್ತು ದಿನ ಕಲಾಪ ಪೂರ್ತಿಯಾಗಿ ಅದರಂತೆಯೇ ನಡೆದುಕೊಂಡರು.ವಿಪಕ್ಷ ನಾಯಕರಾಗಿ ಅಶೋಕ್ ಅವರ ಮೊದಲ ಅಧಿವೇಶನ ಇದಾಗಿರುವುದರಿಂದಾಗಿ ಆಕ್ರಮಣಕಾರಿಯಾದಂತಹ ಚರ್ಚೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಆ ರೀತಿಯ ಕಲಾಪಗಳು ಕಂಡುಬರಲೇ ಇಲ್ಲ.

ಬರದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಯವರ ಬದಲಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದಾಗಲೂ ಬಿಜೆಪಿಯವರು ಸಹಿಸಿಕೊಂಡಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿಯ ಕುರಿತು ನಡೆದ ಸುದೀರ್ಘ ಚರ್ಚೆಯಲ್ಲಿ ನಿನ್ನೆ ಮುಖ್ಯಮಂತ್ರಿಯವರು ಉತ್ತರ ನೀಡಿದ ವೇಳೆ ಮಹತ್ವದ ಘೋಷಣೆಗಳೇನೂ ಕಂಡುಬರಲಿಲ್ಲ. ಆದರೂ ಬಿಜೆಪಿ ಪ್ರತಿಭಟನೆ ಮಾಡುವುದಾಗಿ ಸಭಾತ್ಯಾಗ ಮಾಡದೇ ಸಹನೆಯಿಂದ ಕುಳಿತಿದ್ದು ಅಚ್ಚರಿ ಮೂಡಿಸಿತ್ತು.

ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ

ಕೊನೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪರಿಸಮಾಪ್ತಿ ವರದಿ ಓದುವಾಗ ಬಿಜೆಪಿ ನಾಯಕರು ರೈತರ ಸಾಲಮನ್ನಾ ಮಾಡಬೇಕೆಂದು ಪಟ್ಟುಹಿಡಿದು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾಗಿದ್ದರು. ಆ ವೇಳೆಗಾಗಲೇ ತಡವಾಗಿತ್ತು. ಸಭಾಧ್ಯಕ್ಷರು ಸದನವನ್ನು ಮುಕ್ತಾಯಗೊಳಿಸುವ ಸಲುವಾಗಿ ರಾಷ್ಟ್ರಗೀತೆ ಗಾಯನವನ್ನು ಆರಂಭಿಸಿದರು. ಹೀಗಾಗಿ ಬಿಜೆಪಿಯ ಹೋರಾಟ ನೆಪಮಾತ್ರ ಎನ್ನುವಂತಾಗಿತ್ತು.

ಅದೇ ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿಯವರು ಉತ್ತರ ನೀಡುವಾಗ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಭಾರೀ ಗದ್ದಲ ನಡೆಸಿದ್ದರು. ಅಲ್ಲಿ ವಿರೋಧಪಕ್ಷದ ನಾಯಕರು ಇಲ್ಲದೇ ಇದ್ದರೂ ಸಾಮೂಹಿಕ ನಾಯಕತ್ವದಲ್ಲಿ ಸರ್ಕಾರದ ವಿರುದ್ಧ ಸಮರ್ಥ ಪ್ರತಿಭಟನೆ ಕಂಡುಬಂದಿತು.

ವಿಧಾನಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ ಚರ್ಚೆಯಾದ ವೇಳೆಯಲ್ಲೂ ವಿಪಕ್ಷ ನಾಯಕರು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂಬ ಆಕ್ಷೇಪಗಳಿವೆ. ನಿನ್ನೆ ಮುಖ್ಯಮಂತ್ರಿಯವರು ಬಿಜೆಪಿಯ ಪ್ರಮುಖ ನಾಯಕರ ಹೆಸರನ್ನು ಹೇಳುತ್ತಾ, ಅವರು ನನ್ನ ಸ್ನೇಹಿತರು….ಇವರು ನಮ್ಮವರು ಎಂದು ಔಪಚಾರಿಕವಾಗಿ ಹೇಳಿದ್ದು ಕಂಡುಬಂದಿತ್ತಾದರೂ ವಾಸ್ತವದಲ್ಲಿ ಹೊಂದಾಣಿಕೆಯ ರಾಜಕಾರಣದ ಅನುಮಾನದ ಗುಮ್ಮ ಮೊಗಸಾಲೆಯಲ್ಲಿ ಬಿರುಸಾಗಿ ಓಡಾಡಿತು.

ಐಎನ್‍ಎಸ್ ಸುದ್ದಿಸಂಸ್ಥೆಯ ಷೇರು ಖರೀದಿಸಿದ ಅದಾನಿ

ಹೀಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರಬಲ ಪ್ರತಿಪಕ್ಷದ ಕೊರತೆಯನ್ನು ಎದುರಿಸುವಂತಾಗಿದೆ. ಜೆಡಿಎಸ್ ನಾಯಕರು ಅವೇಶನಕ್ಕೆ ಬರುವುದಕ್ಕೆ ನಿರಾಸಕ್ತಿ ತೋರಿಸಿದ್ದು ಎದ್ದು ಕಾಣುತ್ತಿತ್ತು.

RELATED ARTICLES

Latest News