Friday, April 26, 2024
Homeಬೆಂಗಳೂರುಬೈಕ್ ವೇಗ ತೋರಿಸಿಕೊಳ್ಳಲು ಹೋಗಿ ಪ್ರಾಣ ಚೆಲ್ಲಿದ ಯುವಕ

ಬೈಕ್ ವೇಗ ತೋರಿಸಿಕೊಳ್ಳಲು ಹೋಗಿ ಪ್ರಾಣ ಚೆಲ್ಲಿದ ಯುವಕ

ಬೆಂಗಳೂರು, ಡಿ.21- ಅತ್ಯಾಧುನಿಕ ಬಿಎಂಡಬ್ಲ್ಯೂ ಬೈಕ್ ಎಷ್ಟು ವೇಗವಾಗಿ ಹೋಗುತ್ತದೆಂದು ತಿಳಿಯಲು ಇಬ್ಬರು ಬೈಕ್ ಡೀಲರ್‍ಗಳು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟಿರುವ ಘಟನೆ ವಿಲ್ಸನ್‍ಗಾರ್ಡನ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಂಭವಿಸಿದೆ. ಡೈರಿ ಸರ್ಕಲ್ ನಿವಾಸಿ ಶೇಖ್ ನೌಶೀರ್ ಅಹಮ್ಮದ್(34) ಮೃತಪಟ್ಟವರು. ಹಿಂಬದಿ ಸವಾರ ಮುದಾಸೀರ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೌಶೀರ್ ಹಾಗೂ ಮುದಾಸೀರ್ ಬೈಕ್ ಡೀಲರ್‍ಗಳು. ಮುದಾಸೀರ್‍ಗೆ ಗ್ರಾಹಕರೊಬ್ಬರು ಅತ್ಯಾಧುನಿಕ ಬಿಎಂಡಬ್ಲ್ಯೂ ಬೈಕ್ ಬೇಕೆಂದು ಕೇಳಿದ್ದಾರೆ. ಈ ಬಗ್ಗೆ ನೌಶೀರ್‍ಗೆ ಹೇಳಿದಾಗ ನನ್ನ ಬಳಿ ಬಿಎಂಡಬ್ಲ್ಯೂ ಬೈಕ್ ಇದೆ. ಈ ಬೈಕ್ ಎಷ್ಟು ವೇಗವಾಗಿ ಹೋಗುತ್ತದೆಂದು ತೋರಿಸುತ್ತೇನೆಂದು ಹೇಳಿದ್ದಾನೆ. ಇವರಿಬ್ಬರು ರಾತ್ರಿ 9.20ರ ಸುಮಾರಿನಲ್ಲಿ ಬಿಎಂಡಬ್ಲ್ಯೂ ಬೈಕ್‍ನಲ್ಲಿ ಮಾದವ ಪಾರ್ಕ್‍ನಿಂದ ಅಶೋಕ ಪಿಲ್ಲರ್ ಕಡೆಗೆ ಅತಿ ವೇಗವಾಗಿ ಹೋಗುತ್ತಿದ್ದರು.

ಬೈಕ್‍ನ್ನು ನೌಶೀರ್ ಚಾಲನೆ ಮಾಡುತ್ತಿದ್ದರು. ಮುದಾಸೀರ್ ಹಿಂಬದಿ ಕುಳಿತುಕೊಂಡು ಹೋಗುತ್ತಿದ್ದಾಗ ಕನಕಪಾಳ್ಯ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಇವರ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕೆಳಗೆ ಬಿದ್ದು ಗಂಭೀರ ಗಾಯಗೊಂಡರು. ಇವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಶೇಖ್ ನೌಶೀರ್ ಅಹಮದ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಮುದಾಸೀರ್ ಮುಖಕ್ಕೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಖರ್ಗೆಯವರು ಪ್ರಧಾನಿ ಅಭ್ಯರ್ಥಿಯಾದರೆ ಸಂತಸದ ವಿಷಯ : ಪರಮೇಶ್ವರ್

ಸುದ್ದಿ ತಿಳಿದು ವಿಲ್ಸನ್‍ಗಾರ್ಡನ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಿಎಂಡಬ್ಲ್ಯೂ ಬೈಕ್ ಹಾಗೂ ಕಾರು ಅತಿ ವೇಗವಾಗಿ ಹೋಗುತ್ತಿದ್ದರಿಂದ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

RELATED ARTICLES

Latest News