Friday, March 29, 2024
Homeರಾಜ್ಯಎಮ್ಮೆಯನ್ನು ನೀರಿನಲ್ಲಿ ನಿಲ್ಲಿಸಿ ಹಾಲು ಕರೆದಂತಾಗಿದೆ : ಸಚಿವ ರಾಜಣ್ಣ

ಎಮ್ಮೆಯನ್ನು ನೀರಿನಲ್ಲಿ ನಿಲ್ಲಿಸಿ ಹಾಲು ಕರೆದಂತಾಗಿದೆ : ಸಚಿವ ರಾಜಣ್ಣ

ತುಮಕೂರು,ನ.23- ಬಿಹಾರದಲ್ಲಿ ಜಾತಿಗಣತಿ ವರದಿ ಅಂಗೀಕಾರಗೊಂಡಿರುವುದರಿಂದ ಆಕಾಶವೇನೂ ಬಿದ್ದುಹೋಗಿಲ್ಲ ಎಂದು ಹೇಳುವ ಮೂಲಕ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಮ್ಮ ಮನೆಯಲ್ಲಿಂದು ಗೃಹಸಚಿವ ಪರಮೇಶ್ವರ್ ಅವರೊಂದಿಗೆ ಉಪಹಾರಕೂಟ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಏನಿದೆ ಎಂದು ಈವರೆಗೂ ಯಾರಿಗೂ ಗೊತ್ತಿಲ್ಲ. ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಬೇಕು. ಅದರಲ್ಲಿ ಏನಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕು. ಬಳಿಕ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೂ ಆಗದೆ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ ಎಂದರು.

ಎಮ್ಮೆಯನ್ನು ನೀರಿನಲ್ಲಿ ನಿಲ್ಲಿಸಿ ಹಾಲು ಕರೆದಂತಾಗಿದೆ ಈಗಿನ ಪರಿಸ್ಥಿತಿ. ನೀರಿನಲ್ಲಿ ನಿಂತಿರುವುದು ಎಮ್ಮೆಯೋ? ಕೋಣವೋ ಎಂಬುದೇ ಗೊತ್ತಿಲ್ಲ ಎಂದು ಮುಗುಮ್ಮಾಗಿ ಹೇಳಿದರು. ಬಿಹಾರದಲ್ಲಿ ಜಾತಿಗಣತಿ ನಡೆದಿದೆ. ವರದಿ ಸಲ್ಲಿಕೆಯಾಗಿ ಅಂಗೀಕಾರಗೊಂಡಿದೆ. ಬಳಿಕ ಆಕಾಶವೇನು ಬಿದ್ದು ಹೋಗಿಲ್ಲ ಎಂದು ಪುನರುಚ್ಚರಿಸಿದರು.

ಅಂತಿಮ ಹಂತ ತಲುಪಿದ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ

ಪರಮೇಶ್ವರ್ ಅವರೊಂದಿಗೆ ಭೇಟಿ ಸೌಹಾರ್ದಯುತವಾಗಿದೆ. ಉಪಹಾರಕೂಟದ ವೇಳೆ ನಡೆದ ಚರ್ಚೆಯ ಬಗ್ಗೆ ಮುಂದಿನ ದಿನಗಳಲ್ಲಿ ವಿವರಣೆ ನೀಡುತ್ತೇವೆ. ಹಿರಿಯೂರಿನ ಕಾರ್ಯಕ್ರಮವೊಂದಕ್ಕೆ ನಾವಿಬ್ಬರು ಭೇಟಿ ನೀಡಬೇಕಾಗಿತ್ತು. ಹೀಗಾಗಿ ಜೊತೆಯಲ್ಲಿ ಉಪಹಾರ ಸೇವಿಸಿದ್ದೇವೆ ಎಂದರು.

ಬಿಜೆಪಿಯ ನಾಯಕ ಮಾಜಿ ಸಚಿವ ವಿ.ಸೋಮಣ್ಣ ನಮ್ಮ ಸ್ನೇಹಿತ. ಅವರೊಂದಿಗೆ ಮಾತನಾಡುವುದರಲ್ಲಿ ವಿಶೇಷತೆ ಏನಿಲ್ಲ. ನಾನಾಗಿಯೇ ಅವರಿಗೆ ಕರೆ ಮಾಡುತ್ತೇನೆ. ನನ್ನನ್ನು ಅವರು ಬಿಜೆಪಿಗೆ ಆಹ್ವಾನಿಸಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಪರಮೇಶ್ವರ್ ಅವರು ಸೋಮಣ್ಣ ಸೇರಿದಂತೆ ಯಾರೇ ಕಾಂಗ್ರೆಸ್‍ಗೆ ಬರುವಂತಿದ್ದರೆ ಅದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಮಟ್ಟದಲ್ಲಿ ಚರ್ಚೆಯಾಗುತ್ತದೆ. ತಮಗೆ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದರು.

RELATED ARTICLES

Latest News