ಪಿಎಸ್ಐ ಪರೀಕ್ಷೆ ಹಗರಣ : ಮಂಡ್ಯದ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷನ ಸೆರೆ
ಈ ಸುದ್ದಿಯನ್ನು ಶೇರ್ ಮಾಡಿ
ಬೆಂಗಳೂರು,ಮೇ11- ಪಿಎಸ್ಐ ನೇಮಕಾತಿ ಹಗರಣ ಮಂಡ್ಯ ಜಿಲ್ಲೆಗೂ ಕಾಲಿಟ್ಟಿದ್ದು, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿಕ್ಕಿ ಬಿದ್ದಿದ್ದಾನೆ. ಕಲಬುರಗಿಯಿಂದ ಆರಂಭವಾದ ಹಗರಣದ ಬೇರುಗಳು ಬೆಂಗಳೂರು, ಧಾರವಾಡ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ಈಗ ಮಂಡ್ಯದಲ್ಲೂ ಚಿಗುರೊಡೆದಿದೆ.
ಶ್ರವಣಬೆಳಗೊಳದ ಯುವಕನೊಬ್ಬ ಪಿಎಸ್ಐ ನೇಮಕಾತಿಯ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದು, ಈತನ ಆಯ್ಕೆಗೆ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಿಐಡಿ ಪೊಲೀಸರು ಕಾಂಗ್ರೆಸ್ ಮುಖಂಡನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡಿದ ನಾಲ್ವರು ಪೊಲೀಸರನ್ನು ಬಂಸಲಾಗಿದ್ದು, ತನಿಖೆ ಮುಂದುವರೆದಿದೆ.
Facebook Comments