Saturday, April 20, 2024
Homeಬೆಂಗಳೂರುಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?

ಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?

ಬೆಂಗಳೂರು,ಅ.11- ಬಡವರ ಪಾಲಿನ ಅನ್ನಪೂರ್ಣೇಶ್ವರಿ ಎಂದೆ ಪ್ರಸಿದ್ಧಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸಾದ ಇಂದಿರಾ ಕ್ಯಾಂಟಿನ್‍ಗಳಿಗೆ ಇನ್ನು ಓಪನಿಂಗ್ ಭಾಗ್ಯ ಸಿಕ್ಕಿಲ್ಲ.ಇದನ್ನು ಗಮನಿಸಿದರೆ ಬಿಬಿಎಂಪಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸಿಗೆ ಎಳ್ಳು ನೀರು ಬಿಟ್ರ ಎಂಬ ಅನುಮಾನ ಕಾಡತೊಡಗಿದೆ.

ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರ್ತಿದಂಗೆ ಇಂದಿರಾ ಕ್ಯಾಂಟೀನ್ ಅನ್ನೂ ಮರು ಓಪನ್ ಮಾಡ್ತಿವಿ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರೂ ಆದರೆ, ಇದುವರೆಗೂ ಇಂದಿರಾ ಕ್ಯಾಂಟಿನ್‍ಗಳು ಓಪನ್ ಆಗದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಚೀನಾಗೆ ನೆರವು ನೀಡಿದ್ದನ್ನು ಒಪ್ಪಿಕೊಂಡ ಅಮೆರಿಕನ್ ನಾವಿಕ

ಕಳೆದ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರಿನ ಕೇಲವು ಕಡೆ ಇಂದಿರಾ ಕ್ಯಾಂಟೀನ್ ಗಳನ್ನ ಬಂದ್ ಮಾಡಲಾಗಿತ್ತು. ಆದರೆ, ರಾಜ್ಯದಲ್ಲಿ ಮತ್ತೆ ಕಾಂಗ್ರೇಸ್ ಸರ್ಕಾರ ಬರ್ತಿದಂಗೆ ಬಾಗಿಲು ಮುಚ್ಚಿದ ಕ್ಯಾಂಟೀನ್ ಗಳನ್ನೂ ರೀ ಓಪನ್ ಮಾಡ್ತಿವಿ ಅಂತ ಸಿಎಂ ಹೇಳಿಕೆ ನೀಡಿದ್ರು.

ನಗರದ ಕಾಲೇಜು, ಬಸ್ ಸ್ಟಾಪ್ , ವಿಧಾನಸೌಧ, ಏರ್‍ಪೆಪೋರ್ಟ್‍ಗಳಲ್ಲೂ ಕೂಡ ಕ್ಯಾಂಟೀನ್ ಓಪನ್ ಮಾಡ್ತಿವಿ ಅಂತ ಭರವಸೆ ನೀಡಿದ್ದರು. ಇದರ ಜತೆಗೆ ಊಟದಲ್ಲೂ ವಿಶೇಷತೆ ಇರಲಿದೆ ಎಂದು ಹೇಳಿ ನಾಲ್ಕು ತಿಂಗಳು ಕಳೆದರೂ ಕ್ಯಾಂಟಿನ್‍ಗಳು ಮಾತ್ರ ಓಪನ್ ಆಗುತ್ತಿಲ್ಲ.

ಹರಿದಾಡುತ್ತಿದೆ ಇಸ್ರೇಲ್-ಹಮಾಸ್ ಯುದ್ಧದ ನಕಲಿ ವಿಡಿಯೋಗಳು

ಹಾಗಾದ್ರೆ ಇಂದಿರಾ ಕ್ಯಾಂಟೀನ್ ಓಪನ್ ಮಾಡೋದಕ್ಕೆ ಸರ್ಕಾರಕ್ಕೆ ಮನಸು ಇಲ್ವ,,? ಅಥವಾ ಗ್ಯಾರಂಟಿ ಯೋಜನೆ ಜಾರಿಯಿಂದ ಕ್ಯಾಂಟೀನ್ ಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲವೋ ಎನ್ನೋದು ಆರ್ಥವಾಗುತ್ತಿಲ್ಲ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 176 ಕ್ಯಾಂಟೀನ್ ಗಳು ಇವೇ ಆದರೆ, ಈಗ 30 ಕ್ಯಾಂಟೀನ್ ಗಳು ಬಾಗಿಲು ಬಂದ್ ಅಗಿವೇ,, ಅ„ಕಾರಕ್ಕೆ ಬರ್ತಿದಂಗೆ ಬಡವರ ಹಸಿವು ನಿಗಿಸೋ ಕ್ಯಾಂಟೀನ್ ರೀ ಓಪನ್ ಮಾಡ್ತಿನಿ ಅಂದ ಸರ್ಕಾರ ಈಗ ಯಾಕೆ ಓಪನ್ ಮಾಡ್ತಿಲ್ಲ,, ಸಿದ್ದರಾಮಯ್ಯ ಕನಸಿನ ಕೂಸಿಗೆ ತಣ್ಣಿರು ಎರಚಿತ ಗ್ಯಾರಂಟಿ ಯೋಜನೆಗಳು ಎಂಬ ಅನುಮಾನ ಕಾಡತೊಡಗಿದೆ.

RELATED ARTICLES

Latest News