Saturday, April 20, 2024
Homeರಾಷ್ಟ್ರೀಯಚುನಾವಣಾ ಬಾಂಡ್ ಹಗರಣದ ಮರೆಮಾಚಲು ಕೇಜ್ರಿವಾಲ್ ಬಂಧನ ; ಪಿಣರಾಯಿ ವಿಜಯನ್

ಚುನಾವಣಾ ಬಾಂಡ್ ಹಗರಣದ ಮರೆಮಾಚಲು ಕೇಜ್ರಿವಾಲ್ ಬಂಧನ ; ಪಿಣರಾಯಿ ವಿಜಯನ್

ಕಣ್ಣೂರು, ಮಾ.25 (ಪಿಟಿಐ) – ಚುನಾವಣಾ ಬಾಂಡ್ ಹಗರಣದ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ವಿವಾದಿತ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಸಿಪಿಐ(ಎಂ) ಇಲ್ಲಿ ಆಯೋಜಿಸಿದ್ದ ಸತತ ಮೂರನೇ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ವಿಜಯನ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಸಂಘ ಪರಿವಾರವು ಕಾನೂನು ಸುವ್ಯವಸ್ಥೆಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಸಂಘಪರಿವಾರವು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಮತ್ತು ದೇಶದ ನ್ಯಾಯಾಂಗಕ್ಕೆ ಬೆದರಿಕೆ ಹಾಕುತ್ತಿದೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರ, ಬಿಜೆಪಿ, ಸಂಘಪರಿವಾರ, ಚುನಾವಣಾ ಬಾಂಡ್ ಹಗರಣದ ಸುಪ್ರೀಂ ಕೋರ್ಟ್ ಆದೇಶವು ತಮಗೆ ಹಾನಿಕರ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಅವರು ಈ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಯಸಿದ್ದರು ಮತ್ತು ಅದಕ್ಕಾಗಿ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ ಎಂದು ವಿಜಯನ್ ಹೇಳಿದರು.ಚುನಾವಣಾ ಬಾಂಡ್‍ಗಳ ಕಲ್ಪನೆಯನ್ನು ತೇಲಿಬಿಟ್ಟಾಗ, ಸಿಪಿಐ(ಎಂ) ಭ್ರಷ್ಟಾಚಾರದ ಸಾಧನವಾಗಿರುವುದರಿಂದ ಅದನ್ನು ವಿರೋಧಿಸಿತು ಮತ್ತು ಅದರ ವಿರುದ್ಧ ಸುಪ್ರೀಂ ಕೋರ್ಟ್‍ಗೆ ಹೋಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು.

ಚುನಾವಣಾ ಬಾಂಡ್ ಹಗರಣವು ಭಾರತದಲ್ಲಿ ಇದುವರೆಗೆ ಕಂಡಿರುವ ಅತಿದೊಡ್ಡ ಭ್ರಷ್ಟಾಚಾರವಾಗಿದೆ. ಅಂತಹ ಘೋರ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಹೇಗೆ ಧೈರ್ಯ ಬಂತು? ಅವರು (ಬಿಜೆಪಿ) ತಮ್ಮನ್ನು ಎಂದಿಗೂ ಪ್ರಶ್ನಿಸುವುದಿಲ್ಲ ಎಂದು ಭಾವಿಸಿದ್ದರು ಎಂದು ತೋರುತ್ತದೆ ಎಂದಿದ್ದಾರೆ.ಕೇಜ್ರಿವಾಲ್ ಅವರ ಬಂಧನದೊಂದಿಗೆ, ಸಂಘಪರಿವಾರವು ತಾವು ದೇಶದ ಕಾನೂನಿಗಿಂತ ಮೇಲಿದ್ದೇವೆ ಮತ್ತು ತಮ್ಮ ಕಾರ್ಯಸೂಚಿಯನ್ನು ಜಾರಿಗೆ ತರಲು ಏನು ಬೇಕಾದರೂ ಮಾಡಲಿದೆ ಎಂಬ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದೆ ಎಂದು ವಿಜಯನ್ ಹೇಳಿದರು..

RELATED ARTICLES

Latest News