Friday, April 19, 2024
Homeರಾಜ್ಯಕೆಪಿಎಸ್‍ಸಿ ಸಂಘರ್ಷದಲ್ಲಿ ಉದ್ಯೋಗವಿಲ್ಲದೆ ನಲುಗುತ್ತಿರುವ ಅಭ್ಯರ್ಥಿಗಳು

ಕೆಪಿಎಸ್‍ಸಿ ಸಂಘರ್ಷದಲ್ಲಿ ಉದ್ಯೋಗವಿಲ್ಲದೆ ನಲುಗುತ್ತಿರುವ ಅಭ್ಯರ್ಥಿಗಳು

ಬೆಂಗಳೂರು, ಜ.14- ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವೈಖರಿಯಿಂದ ಸಹಸ್ರಾರು ಉದ್ಯೋಗಾಕಾಂಕ್ಷಿ ಯುವಕ ಯುವತಿಯರು ಬಧಿಸತ್ತಿದ್ದಾರೆ. ಆಯೋಗದ ಒಟ್ಟು ನಡವಳಿಕೆಯಿಂದ ತಮಗೆ ಭವಿಷ್ಯವೇ ಇಲ್ಲವೇನೋ ಎಂಬ ಹತಾಶ ಭಾವನೆಗೆ ತಲುಪುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಇದೀಗ ಲೋಕಸೇವಾ ಆಯೋಗದ ಮತ್ತೋರ್ವ ಕಾರ್ಯದರ್ಶಿ ಮತ್ತು ಆಯೋಗದ ಸದಸ್ಯರ ನಡುವೆ ಯಥಾ ಪ್ರಕಾರ ಸಂಘರ್ಷ ಪ್ರಾರಂಭವಾಗಿದೆ. ಈ ಕುರಿತು ನಾನು ನಿರಂತರವಾಗಿ ಸರ್ಕಾರಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇನೆ. ಇವರಿಬ್ಬರ ನಡುವಿನ ಜಗಳದಲ್ಲಿ ಉದ್ಯೋಗಾಕಾಂಕ್ಷಿಗಳು ಬಡವಾಗುತ್ತಿದ್ದಾರೆ ಎಂದರು. ಒಟ್ಟು ಈ ಲೋಕ ಸೇವಾ ಆಯೋಗದ ವಿಳಂಬ ಪ್ರವೃತ್ತಿ ವಿರುದ್ಧ ಲೋಕಸೇವಾ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಮುಖಂಡ ಶಾಂತಕುಮಾರ್ ಅವರನ್ನು ಬಂಧಿಸಿ ಜೈಲಿಗೆ ಕಳಿಸಿರುವುದು ಅತ್ಯಂತ ನಿರ್ದಯಿ ಕ್ರಮ ಎಂದು ತಿಳಿಸಿದರು.

ಆಯೋಧ್ಯೆಗೆ ಹೊಸ ಲುಕ್, ಝಗಮಗಿಸುವ ದೀಪಾಲಂಕಾರ

ಕರ್ನಾಟಕ ಲೋಕಾ ಸೇವಾ ಆಯೋಗ, ಕೇವಲ ತಕರಾರು ಮಾಡುವ ಜಾಯಮಾನ ತೊರೆದು, ಒಂದು ಕಾಲಮಿತಿಯಲ್ಲಿ ಕೆಲಸ ಮಾಡಿ ಯಶಸ್ವಿ ಅಭ್ಯರ್ಥಿಗಳ ಪಟ್ಟಿಗಳನ್ನು ಬಿಡುಗಡೆ ಮಾಡುವ ಕಾರ್ಯ ಮಾಡುತ್ತಿದ್ದರೆ ಈ ಯುವಕ ಪ್ರತಿಭಟನೆ ಮಾಡುವ ಅವಶ್ಯಕತೆಯೇ ಇರಲಿಲ್ಲ. ಆದರೆ ಈ ಯುವಕರ ಕೂಗು ಆಯೋಗದ ಕಚೇರಿಯಿಂದ ಅನತಿ ದೂರದಲ್ಲೆ ಇರುವ ವಿಧಾನಸೌಧಕ್ಕೆ ಮುಟ್ಟದಿರುವುದು ವಿಷಾದಕರ ಎಂದರು.

ಇನ್ನಷ್ಟು ಪ್ರತಿಭಟನೆಗಳು ಆಗದಂತೆ ತಡೆಯಲು, ಈ ಯುವ ಆಕಾಂಕ್ಷಿಗಳು ಸಿನಿಕ ರಾಗದಂತೆ ಎಚ್ಚರ ವಹಿಸಲು ಕ್ರಮ ಅಗತ್ಯವಿದೆ. ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಆಯೋಗದ ಅಧ್ಯಕ್ಷರಿಗೆ ಮತ್ತು ಸದಸ್ಯರುಗಳಿಗೆ ಅಗತ್ಯ ತಿಳುವಳಿಕೆ ನೀಡಬೇಕೆಂದು, ಆಯೋಗವು ತನ್ನ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ.

RELATED ARTICLES

Latest News