Thursday, April 25, 2024
Homeಬೆಂಗಳೂರುಬೆಂಗಳೂರಲ್ಲಿ ಮನೆಗೆ ನುಗ್ಗಿ ರೌಡಿಯಭೀಕರ ಕೊಲೆ

ಬೆಂಗಳೂರಲ್ಲಿ ಮನೆಗೆ ನುಗ್ಗಿ ರೌಡಿಯಭೀಕರ ಕೊಲೆ

ಬೆಂಗಳೂರು, ಜ.24- ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಲಗಿದ್ದ ರೌಡಿ ಮೇಲೆ ಮಚ್ಚು, ಲಾಂಗ್ಗಳಿಂದ ಮನ ಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿ ಯಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಮಾಯಾ ಬಜಾರ್ ನಿವಾಸಿ ಸತೀಶ್ ಅಲಿಯಾಸ್ ಮಿಲಿಟರಿ ಸತೀಶ್(30) ಕೊಲೆಯಾದ ರೌಡಿ.

ಸತೀಶ್ ಅವರ ತಂದೆ ಮಿಲಿಟರಿಯಲ್ಲಿದ್ದರು. ಹಾಗಾಗಿ ಈತನ ಹೆಸರಿನ ಜೊತೆ ಮಿಲಿಟರಿ ಎಂದು ಸೇರಿಸಿಕೊಂಡಿದೆ. ರಾತ್ರಿ ಎಂದಿನಂತೆ ಊಟ ಮಾಡಿ ಹಾಲ್ನಲ್ಲಿ ಸತೀಶ್ ಮಲಗಿದ್ದರೆ, ಇವರ ಪತ್ನಿ ಹಾಗೂ ಮಕ್ಕಳು ಬೇರೆ ರೂಮ್ನಲ್ಲಿ ಮಲಗಿದ್ದರು.

ಇಂದು ಮುಂಜಾನೆ 3.30ರ ಸುಮಾರಿನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ಇವರ ಮನೆ ಒಳಗೆನುಗ್ಗಿ ಹಾಲ್ನಲ್ಲಿ ಮಲಗಿದ್ದ ಸತೀಶ್ನ ಮೇಲೆ ಏಕಾಏಕಿ ಮಚ್ಚು, ಲಾಂಗ್ಗಳಿಂದ ಹೊಟ್ಟೆ, ಕೈಕಾಲು ಸೇರಿದಂತೆ ಇತರ ದೇಹದ ಭಾಗಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಈತನ ಕೂಗಾಟ ಕೇಳಿ ಎಚ್ಚರಗೊಂಡ ಪತ್ನಿ ಹಾಗೂ ಮಕ್ಕಳು, ನೆರೆಹೊರೆಯವರ ಸಹಾಯದೊಂದಿಗೆ ಸತೀಶ್ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.ಸತೀಶ್ ವಿರುದ್ಧ ಕೊಲೆ ಯತ್ನ ಹಾಗೂ ಡಕಾಯಿತಿಗೆ ಸಂಚು ಪ್ರಕರಣಗಳು ದಾಖಲಾಗಿವೆ. ಕ್ಷುಲ್ಲಕ ಕಾರಣಕ್ಕೆ ಈತನ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಅಯೋಧ್ಯೆಯಲ್ಲಿ 2 ತಿಂಗಳವರೆಗೂ ಭಕ್ತರಿಗೆ ನಿರಂತರ ಊಟದ ವ್ಯವಸ್ಥೆ

ಇತ್ತೀಚೆಗೆ ಸತೀಶ್ ಯಾರಿಗೋ ಬೈದಿದ್ದು, ಆ ವಿಚಾರದಲ್ಲಿ ದ್ವೇಷ ಸಾಸಿ ಸಂಚು ರೂಪಿಸಿಕೊಂಡು ಬಂದು ಇಂದು ಮುಂಜಾನೆ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಸುದ್ದಿ ತಿಳಿದು ವಿವೇಕನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.

RELATED ARTICLES

Latest News