Tuesday, March 19, 2024
Homeಮನರಂಜನೆನಟ ಶಾರುಖ್​ ಖಾನ್​ಗೆ ವೈ ಪ್ಲಸ್ ಭದ್ರತೆ

ನಟ ಶಾರುಖ್​ ಖಾನ್​ಗೆ ವೈ ಪ್ಲಸ್ ಭದ್ರತೆ

ಮುಂಬೈ,ಅ.9-ಮುಂಬೈ- ಪಠಾಣ್ ಹಾಗೂ ಜವಾನ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಮಹಾರಾಷ್ಟ್ರ ಸರ್ಕಾರವು ದಿಢೀರನೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ. ಬಾಲಿವುಡ್ ನಟನಿಗೆ ಹಲವು ರೀತಿಯಲ್ಲಿ ಜೀವ ಬೆದರಿಕೆ ಇರುವ ಕಾರಣ ವೈ ಪ್ಲಸ್ ಕೆಟಗರಿ ಭದ್ರತೆ ಒದಗಿಸಲಾಗಿದೆ ಎಂಬುದನ್ನು ಮುಂಬೈ ಪೊಲೀಸ್ ಮೂಲಗಳು ದೃಢಪಡಿಸಿವೆ.

ಮಹಾರಾಷ್ಟ್ರದ ಉನ್ನತ ಪ್ರಭಾವಿ ಸಮಿತಿಯು ಶಾರುಖ್ ಖಾನ್ ಅವರಿಗೆ ವೈ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಭದ್ರತೆ ಒದಗಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆ ವೇಳೆ ಉಂಟಾದ ವಿವಾದದ ಬಳಿಕ ನಟನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಇದೇ ಕಾರಣಕ್ಕಾಗಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಅವರ ಭದ್ರತೆಗೆ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಜೊತೆಗೆ ಭದ್ರತೆಗಾಗಿ ಅವರದೇ ಆದ ವೈಯಕ್ತಿಕ ಅಂಗರಕ್ಷಕರಿದ್ದರು. ಆದರೀಗ ಹೈ-ಪರ್ವ ಕಮಿಟಿಯ ಶಿಫಾರಸುಗಳನ್ನು ಅನುಸರಿಸಿ ಶಾರುಖ್ ಖಾನ್ ಅವರ ಭದ್ರತೆಯನ್ನು ವೈ ಪ್ಲಸ್ ಭದ್ರತೆಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

ಕಂದಕಕ್ಕೆ ಬಸ್ ಉರುಳಿ ಬಿದ್ದು 6 ಪ್ರಯಾಣಿಕರ ಸಾವು

ಜವಾನ್ ನಟ ಶಾರುಖ್ ಖಾನ್ ಜೊತೆಗೆ ಸದ್ಯ ರಾಜ್ಯದ ವಿಐಪಿ ಭದ್ರತಾ ಘಟಕದ 6 ಟ್ರೆಂಡ್ ಕಮಾಂಡೋಗಳ ತಂಡ ಯಾವಾಗಲೂ ಇರುತ್ತದೆ. ಭದ್ರತಾ ತಂಡ ಯಾವಾಗಲು ಎಂಪಿ -5 ಮೆಷಿನ್ ಗನ್‍ಗಳನ್ನು ಮತ್ತು ಎಕೆ -47 ಅಸಾಲ್ಟ ರೈಫಲ್‍ಗಳನ್ನು ಮತ್ತು ಗ್ಲಾಕ್ ಪಿಸ್ತೂಲ್‍ಗಳನ್ನು ಹೊಂದಿರುತ್ತದೆ.

ಶಾರುಖ್ ಖಾನ್ ಅವರಿಗೆ ನೀಡಿದ ಹೆಚ್ಚುವರಿ ಭದ್ರತೆಯ ಹೊರತಾಗಿ ಅವರ ನಿವಾಸವಾದ ಮನ್ನತ್ ಸುತ್ತಲೂ 24/7 ಪೊಲೀಸರು ಉಪಸ್ಥಿತರಿರುತ್ತಾರೆ. ಅವರ ಬಂಗಲೆಯ ಸುತ್ತಮುತ್ತಲಿನ ಜನರ ಮೇಲೆ ನಿಗಾ ಇಡಲಾಗಿದೆ.ಹೆಚ್ಚುವರಿ ಭದ್ರತೆ ವರದಿಯ ಪ್ರಕಾರ ವೈ ಪ್ಲಸ್ ವಿಭಾಗದಲ್ಲಿ ನಟ ಆರು ಕಮಾಂಡೋಗಳು, ನಾಲ್ಕು ಪೊಲೀಸ್ ಸಿಬ್ಬಂದಿ ಮತ್ತು ಟ್ರಾಫಿಕ್ ಕ್ಲಿಯರೆನ್ಸ್ ವಾಹನ ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ.

ಗೇಮಿಂಗ್ ಮತ್ತು ಬೇಷರಮ್ ಸಾಂಗ್ ವಿವಾದ ಈ ವರ್ಷದ ಆಗಸ್ಟ್‍ನಲ್ಲಿ ಆನ್‍ಲೈನ್ ಗೇಮಿಂಗ್ ಅಪ್ಲಿಕೇಶನ್‍ಗಳನ್ನು ಅನುಮೋದಿಸುವ ಸೆಲೆಬ್ರಿಟಿಗಳ ವಿರುದ್ಧ ಪ್ರತಿಭಟನೆಯಿಂದಾಗಿ ನಟನ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಯಿತು.ಇಂತಹ ಅನುಮೋದನೆಗಳು ಯುವ ಪೀಳಿಗೆಯನ್ನು ದಾರಿ ತಪ್ಪಿಸಬಹುದು ಮತ್ತು ಭ್ರಷ್ಟಗೊಳಿಸಬಹುದು ಎಂಬ ಕಳವಳವನ್ನು ಈ ಪ್ರತಿಭಟನೆಗಳು ಎತ್ತಿ ತೋರಿಸಿದವು.

ಇದಲ್ಲದೆ ಶಾರುಖ್ ಖಾನ್ ಅವರ ಪಠಾಣ ಚಿತ್ರದ ಬೇಷರಂ ರಂಗ್ ಹಾಡಿನ ಸುತ್ತ ವಿವಾದವೆದ್ದಿತ್ತು. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನೆಲೆಸಿರುವ ಪರಮಹಂಸ ಆಚಾರ್ಯ ಅವರು ನಟನ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದರು. ಇದು ಶಾರುಖ್ ಖಾನ್ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾಯಿತು.

ಲಡಾಕ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು

ಈ ವಿವಾದದ ಮಧ್ಯೆಯೂ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಜಾಗತಿಕವಾಗಿ ಒಂದು ಸಾವಿರ ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಇದರ ನಂತರ ಬಂದ ಜವಾನ್ ಸಿನಿಮಾ ಕೂಡ 1,100 ಕೋಟಿ ರೂ. ಗಳಿಸಿದೆ. ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಡಂಕಿ ಸಿನಿಮಾ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ.

RELATED ARTICLES

Latest News