Thursday, April 18, 2024
Homeಜಿಲ್ಲಾ ಸುದ್ದಿಗಳುತುಮಕೂರು : ನಡು ರಸ್ತೆಯಲ್ಲೇ ರೌಡಿಶೀಟರ್‌ನನ್ನ ಕೊಚ್ಚಿ ಕೊಂದ ಸಹಚರರು

ತುಮಕೂರು : ನಡು ರಸ್ತೆಯಲ್ಲೇ ರೌಡಿಶೀಟರ್‌ನನ್ನ ಕೊಚ್ಚಿ ಕೊಂದ ಸಹಚರರು

ತುಮಕೂರು, ಅ.22-ನಡು ರಸ್ತೆಯಲ್ಲಿ ರೌಡಿಶೀಟರ್‍ನನ್ನು ಆತನ ಸಹಚರರೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದಿದೆ. ಮೂಲತಹ ಮಧುಗಿರಿ ಕಂಸಾನಹಳ್ಳಿ ಗ್ರಾಮದ ಮಾರುತಿ ಅಲಿಯಾಸ್ ಪೊಲಾರ್ಡ್(34) ಕೊಲೆಯಾದ ರೌಡಿ.

ಕೊಡಿಗೇನಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಮಾರುತಿ, ಹಟ್ಟಿ ಮಂಜ ಕೊಲೆಸೇರಿದಂತೆ ಹಲವು ಅಪರಾಧ ಕೃತ್ಯದಲ್ಲಿ ಬಾಗಿಯಾಗಿರುವ ಬಗ್ಗೆ ಹಾಲವಾರು ಪ್ರಕರಣಗಳಿವೆ.

ಕಳೆದ ರಾತ್ರಿ ಸ್ನೇಹಿತರ ಗ್ಯಾಂಗ್ ಜೊತೆ ಪಾರ್ಟಿ ಮಾಡಿ ನಂತರ ಕ್ಷುಲಕ ಕಾರಣಕ್ಕೆ ಜಗಳ ನಡೆದಿತ್ತುಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅಲ್ಲಿಂದ ತೆರಳಿದ ಆತನನ್ನು ಸಹಚರರು ಹಿಂಬಾಲಿ ನಂತರ ಆತನ ತಲೆ ಮತ್ತು ಕಾಲಿಗೆ ಮಾರಕಾಸ್ತ್ರದಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹಮಾಸ್-ಇಸ್ರೇಲ್ ಮಾದರಿ ಯುದ್ಧವನ್ನು ಭಾರತ ಕಂಡಿಲ್ಲ : ಭಾಗವತ್

ತಿಲಕ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ,ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.ಸುಮಾರು ನಾಲ್ವರು ಈ ಕೃತ್ಯ ನಡೆಸಿದ್ದಾರೆಂದು ಶಂಕಿಸಲಾಗಿದೆ. ಸ್ಥಳಕ್ಕೆ ತುಮಕೂರು ಎಸ್‍ಪಿ ಅಶೋಕ್, ಎಎಸ್‍ಪಿ ಮರಿಯಪ್ಪ ಹಾಗೂ ಡಿವೈಎಸ್‍ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ

RELATED ARTICLES

Latest News