Wednesday, April 24, 2024
Homeಬೆಂಗಳೂರುಕಳ್ಳನೆಂದು ಭಾವಿಸಿ ಯುವಕನ ಕೊಲೆ

ಕಳ್ಳನೆಂದು ಭಾವಿಸಿ ಯುವಕನ ಕೊಲೆ

ಬೆಂಗಳೂರು, ಅ.5- ನಿರ್ಮಾಣ ಹಂತದ ಮನೆಯ ಕಟ್ಟಡದ ಬಳಿ ಇಬ್ಬರು ಯುವಕರು ಕಳ್ಳತನಕ್ಕೆ ಬಂದಿದ್ದಾರೆಂದು ಸ್ಥಳದಲ್ಲಿದ್ದವರು ಜಗಳವಾಡಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಪೂಜಿ ಲೇಔಟ್ ನಿವಾಸಿ ಖಾದರ್ ಅಹಮದ್ (28) ಕೊಲೆಯಾದ ಯುವಕ.

ಬಾಪೂಜಿ ಲೇಔಟ್, 9ನೇ ಕ್ರಾಸ್, ಕೆಎಫ್‍ಸಿ ಮಳಿಗೆ ಹಿಂಭಾಗ ನಿರ್ಮಾಣ ಹಂತದ ಮನೆಯ ಕಾಮಗಾರಿ ನಡೆಯುತ್ತಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿನಲ್ಲಿ ಖಾದರ್ ಅಹಮದ್ ತನ್ನ ಸ್ನೇಹಿತನ ಜೊತೆ ಈ ಸ್ಥಳಕ್ಕೆ ಬಂದಿದ್ದಾನೆ. ಆ ವೇಳೆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರು ಈ ಇಬ್ಬರು ಯುವಕರನ್ನು ನೋಡಿ ಕಳ್ಳತನಕ್ಕೆ ಬಂದಿದ್ದಾರೆಂದು ಹೇಳಿದ್ದಾರೆ.

ಆ ಸಂದರ್ಭದಲ್ಲಿ ಮನೆ ಮಾಲೀಕನ ಮಗ ರಾಜೇಂದ್ರ ಪ್ರಸಾದ್ ಸ್ಥಳದಲ್ಲಿದ್ದರು. ಇಬ್ಬರು ಯುವಕರನ್ನು ನೋಡಿ, ಇಲ್ಲೇನು ಮಾಡುತ್ತಿದ್ದೀರಿ, ಕಳ್ಳತನಕ್ಕೆ ಬಂದಿದ್ದೀರಾ ಎಂದು ಹೇಳುತ್ತಿದ್ದಂತೆ ಅವರುಗಳ ಮಧ್ಯೆ ಜಗಳವಾಗಿದೆ.ಗಲಾಟೆ ವಿಕೋಪಕ್ಕೆ ತಿರುಗಿದಾಗ ಖಾದರ್ ತನ್ನ ಬಳಿಯಿದ್ದ ಚಾಕು ತೆಗೆದು ರಾಜೇಂದ್ರ ಪ್ರಸಾದ್ ಮೇಲೆ ಹಲ್ಲೆಗೆ ಮುಂದಾದ್ದಾಗ, ತಕ್ಷಣ ರಾಜೇಂದ್ರ ಚಾಕು ಕಿತ್ತುಕೊಂಡಿದ್ದಾರೆ.

ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ಆ ವೇಳೆ ಖಾದರ್ ಅಹಮದ್ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಕೈಗೆ ಸಿಕ್ಕಿದ ಸನಿಕೆ ಮತ್ತು ಮರದ ತುಂಡುಗಳಿಂದ ಹಲ್ಲೆಗೆ ಮುಂದಾದಾಗ ತಕ್ಷಣ ಎಚ್ಚೆತ್ತುಕೊಂಡ ರಾಜೇಂದ್ರ ಪ್ರಸಾದ್ ಕಿತ್ತುಕೊಂಡಿದ್ದ ಅದೇ ಚಾಕುವಿನಿಂದ ಖಾದರ್ ಎದೆಗೆ ಚುಚ್ಚಿದಾಗ ಆತ ಕೆಳಗೆ ಕುಸಿದು ಬಿದ್ದಿದ್ದಾನೆ.

ಖಾದರ್ ಜೊತೆಗಿದ್ದ ಸ್ನೇಹಿತ ಘಟನೆಯಿಂದ ಗಾಬರಿಗೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಕಟ್ಟಡ ಕಾರ್ಮಿಕರು ಹಾಗೂ ರಾಜೇಂದ್ರ ಪ್ರಸಾದ್ ಸೇರಿಕೊಂಡು ಖಾದರ್‍ನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ರಾತ್ರಿ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಚಂದ್ರಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News