Friday, April 26, 2024
Homeಅಂತಾರಾಷ್ಟ್ರೀಯವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ವಿವೇಕ್ ರಾಮಸ್ವಾಮಿಗೆ ಮಧ್ಯದ ಬೆರಳು ತೋರಿಸಿದ ಪ್ರತಿಭಟನಾಕಾರರು

ವಾಷಿಂಗ್ಟನ್ ಅ 6 (ಪಿಟಿಐ) ಉಕ್ರೇನ್‍ಗೆ ನೆರವು ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ಇಬ್ಬರು ವ್ಯಕ್ತಿಗಳು ಅಯೋವಾದಲ್ಲಿ ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ತಮ್ಮ ಮಧ್ಯದ ಬೆರಳನ್ನುತೋರಿಸಿ ಓಡಿ ಹೋದರು ಎಂದು ರಿಪಬ್ಲಿಕನ್ ಪಕ್ಷದ ಅಮೆರಿಕದ ಅಧ್ಯಕ್ಷೀಯ ಆಕಾಂಕ್ಷಿ ಅನಿವಾಸಿ ಭಾರತೀಯ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.

ಆದರೆ ಅಪಘಾತವು ಉದ್ದೇಶಪೂರ್ವಕವಾಗಿದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಯೋವಾದ ಗ್ರಿನ್ನೆಲ್‍ನಲ್ಲಿ ಈ ಘಟನೆ ಸಂಭವಿಸಿದ್ದು, ಮಹಿಳೆಯೊಬ್ಬಳು ಚಾಲನೆ ಮಾಡುತ್ತಿದ್ದ ನೀಲಿ ಬಣ್ಣದ ಹೋಂಡಾ ಸಿವಿಕ್ ಕಾರು ತನ್ನ ಪ್ರಚಾರದ ಎಸ್‍ಯುವಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ನಿಂತಿತು.

ನಂತರ ಆರೋಪಿತ ಪ್ರತಿಭಟನಾಕಾರರು ಕೂಡಲೇ ಸ್ಥಳದಿಂದ ನಿರ್ಗಮಿಸಿದರು. ಪ್ರತಿಭಟನಾಕಾರರಲ್ಲಿ ಇಬ್ಬರು ಮಾತ್ರ ಅನುಚಿತ ವರ್ತನೆ ತೋರಿದ್ದಾರೆ ಉಳಿದವರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಎಂದು ರಾಮಸ್ವಾಮಿ ಎಕ್ಸ್ ಮಾಡಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ ಎಂದು ಕಾರ್ಯಕ್ರಮದ ನಂತರ ರಾಮಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಬಡ್ಡಿ ಫೈನಲ್‍ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ

ನಾನು ಇಂದು ಮುಂಜಾನೆ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾ ಮತ್ತು ಪ್ರತಿಭಟನಾಕಾರರ ಸಣ್ಣ ಗುಂಪನ್ನು ಭೇಟಿ ಮಾಡಿದೆ. ನಾನು ಅವರ ಪ್ರಶ್ನೆಗಳಿಗೆ ಗೌರವಯುತವಾಗಿ ಉತ್ತರಿಸಿದೆ ಮತ್ತು ನಾನು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ಸಹ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.

RELATED ARTICLES

Latest News