Saturday, April 27, 2024
Homeರಾಜಕೀಯಬಿಜೆಪಿ 200 ಸ್ಥಾನ ಗೆಲ್ಲುವುದಿಲ್ಲ : ಸಚಿವ ಸಂತೋಷ್ ಲಾಡ್

ಬಿಜೆಪಿ 200 ಸ್ಥಾನ ಗೆಲ್ಲುವುದಿಲ್ಲ : ಸಚಿವ ಸಂತೋಷ್ ಲಾಡ್

ಬೆಂಗಳೂರು,ಮಾ.14- ಬಿಜೆಪಿಗೆ ಈ ಬಾರಿ ಜನರೇ ಕಡಿವಾಣ ಹಾಕುತ್ತಾರೆ. ಕಳೆದ ಬಾರಿ ಶೇ.39 ರಷ್ಟು ಮತ ಪಡೆದಿದ್ದು, ಈ ಬಾರಿ ಅದು ಶೇ.32 ಕ್ಕೆ ಕುಸಿಯಲಿದೆ. 200 ಸ್ಥಾನಗಳ ಮೇಲೆ ಬಿಜೆಪಿ ಗೆಲ್ಲುವುದಿಲ್ಲ ಎಂಬ ವರದಿ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.’

ವಿಧಾನಸೌಧದ ಬಳಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಲು ಜನ ನಿರ್ಧರಿಸಿದ್ದಾರೆ. ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆ ಗಳಿಂದ ಜನಸಾಮಾನ್ಯರು ಆಕ್ರೋಶಗೊಂಡಿದ್ದಾರೆ. ಭಾವನಾತ್ಮಕ ವಿಚಾರಗಳಿಗೆ ಒತ್ತು ನೀಡುವುದಷ್ಟೇ ಬಿಜೆಪಿ ಆದ್ಯತೆ.

ಅದರ ಹಿಂದಿನ ಹುನ್ನಾರವನ್ನು ಮತದಾರರು ಅರ್ಥ ಮಾಡಿಕೊಂಡಿದ್ದಾರೆ ಎಂದರು. ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ನನಗೆ ವೈಯಕ್ತಿಕ ವಾಗಿ ಬೇಸರ ಮೂಡಿಸಿದೆ. ಪಕ್ಷ ಮತ್ತು ರಾಜಕಾರಣ ಹೊರತಾಗಿ ಆತ ನನಗೆ ಉತ್ತಮ ಸ್ನೇಹಿತ. ಪ್ರತಾಪ್ ಸಿಂಹ ಅವರಿಗೆ ಒಳ್ಳೆಯದಾಗಲಿ ಎಂದರು.

ಬಿಜೆಪಿಗಾಗಿ ಸಾಕಷ್ಟು ಹೋರಾಟ ನಡೆಸಿದರು. ಸಿದ್ದರಾಮಯ್ಯ ಅವರನ್ನು ಟೀಕೆ ಮಾಡಿದರೆ ಟಕೆಟ್ ಸಿಗುತ್ತದೆ ಎಂದು ನಂಬಿಕೊಂಡಿದ್ದರು. ಈಗ ಅವಕಾಶ ತಪ್ಪಿ ಹೋಗಿರುವುದು ಪಾಪ ಎನಿಸುತ್ತದೆ ಎಂದು ಅನುಕಂಪ ವ್ಯಕ್ತಪಡಿಸಿದರು.

RELATED ARTICLES

Latest News